ಮಹಿಳಾ ಸಬಲೀಕರಣ ಕುರಿತಂತೆ ಗಾಂಧೀಜಿಯವರ ದೃಷ್ಠಿಕೋನಗಳು
Author(s)
ಡಾ. ಕವಿತಾ. ಜಿ. ಎನ್
Abstract
ಸಬಲೀಕರಣ ಎಂದರೆ ಅಧಿಕಾರದ ವಿಕೇಂದ್ರೀಕರಣವಾಗಿದೆ. ಸಮಾಜದಲ್ಲಿ ಅಶಕ್ತ ವರ್ಗದ ಜನರಲ್ಲಿ ನಿರ್ಣಯಿಸುವ, ಸಂಪನ್ಮೂಲಗಳನ್ನು ಪಡೆದುಕೊಳ್ಳುವ, ಪ್ರಶ್ನಿಸುವ ಶಕ್ತಿಯನ್ನು ಹೊಂದುವುದೇ ಆಗಿದೆ. ಗಾಂಧೀಜಿಯವರು ಸಬಲೀಕರಣವು ಸಮಾಜದಲ್ಲಿ ಸಮಾನ ಹಕ್ಕುಗಳು, ಸ್ಥಾನಮಾನಗಳು, ಅವಕಾಶಗಳು, ಸ್ವಾತಂತ್ರವನ್ನು ಬೆಳೆಸುವಂತಹ ಪ್ರವೃತ್ತಿ ಎಂಬುದಾಗಿದೆ. ಗಾಂಧೀಜಿಯವರ ಪ್ರಕಾರ ಸಬಲೀಕರಣವು ಮೂರು ಗುರಿಗಳನ್ನು ಹೊಂದಿದೆ, ಅವುಗಳೆಂದರೆ, <ಜiv>. ಬ ಜೀವನಶೈಲಿಯಲ್ಲಿ ಬದಲಾವಣೆಜiv><ಜiv>. ಬ ಇತರರ ಜೀವನಶೈಲಿಯಲ್ಲಿ ಬದಲಾವಣೆಯನ್ನು ತುವುದುಜiv><ಜiv>. ಬ ಸಾಮಾಜಿಕ ಸಂರಚನೆಯ ಬದಲಾವಣೆಜiv><ಜiv>ಮಹಿಳೆಯರ ಸಾಮರ್ಥ್ಯ, ಕೆಲಸದಲ್ಲಿ ನಂಬಿಕೆ ಇರಿಸಿದ್ದ ಗಾಂಧೀಜಿಯವರು ಸಾಮಾಜಿಕ ಬದಲಾವಣೆಯೊಂದಿಗೆ ಆರ್ಥಿಕ, ರಾಜಕೀಯ ರಂಗಗಳಲ್ಲಿ ಮಹಿಳಾ ಭಾಗವಹಿಸುವಿಕೆಗೆ ಪ್ರಾಮುಖ್ಯತೆಯನ್ನು ನೀಡಿದವರು. ಮಹಿಳೆಯರಲ್ಲಿ ಸ್ವಗೌರವ, ಸ್ವನಂಬಿಕೆ, ಸ್ವಸೇವೆಯಂತಹ ಕಲ್ಪನೆಯನ್ನು ಬೆಳೆಸಿ, ಅಹಿಂಸಾ, ಸತ್ಯಶೋಧನೆ, ಸತ್ಯಾಗ್ರಹ ದಂತಹ ಮಾರ್ಗದಲ್ಲಿ ನಡೆಯುವಂತೆ ಕರೆನೀಡಿ, ಇದರಿಂದ ಸಾಂತಿಯುತವಾಗಿ ವಿಮೋಚನೆಯನ್ನು ಹೊಂದುವAತೆ ತಿಳಿಸಿದ್ದಾರೆ. ಮಹಿಳೆ ಎಂದರೆ ವಸ್ತುವಲ್ಲ, ಅವರಿಗೂ ಘನತೆ, ಗೌರವ, ಸ್ಥಾನಮಾನಗಳು ಪುರುಷ ಸಮಾನವಾಗಿ ಸಿಗುವುದರೊಂದಿಗೆ, ಪುರುಷನ ಸಮಾನ ಬೆಳೆಯಬೇಕು. ಮಹಿಳೆಯರು ಸಬಲರು, ಅಬಲೆಯರಲ್ಲ ಎಂಬ ಘೋಷಣೆಯೊಂದಿಗೆ ಸ್ವಾತಂತ್ರ ಚಳುವಳಿಯಲ್ಲಿ ಅವರನ್ನು ಸಮರ್ಥವಾಗಿ ಬಳಸಿಕೊಂಡು ಅವರ ಸಾಮರ್ಥ್ಯವನ್ನು ಸಮಾಜಕ್ಕೆ ತೋರಿಸುವಲ್ಲಿ ಯಶಸ್ವಿಯಾದರು. ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿ, ಸಾರ್ವಜನಿಕವಾಗಿ ಮಹಿಳಾ ಭಾಗವಹಿಸುವಿಕೆಗೆ ಪ್ರೋತ್ಸಾಹವನ್ನು ನೀಡಿದರು. ಮಹಿಳೆಯು ಸಬಲಳಾಗಬೇಕಾದರೆ ಆಕೆಗೆ ಅಧಿಕಾರದ ಅವಶ್ಯಕತೆ ಇದೆ ಎಂಬ ಯೋಚನೆಯೊಂದಿಗೆ ರಾಜಕೀಯ ಭಾಗವಹಿಸುವಿಕೆಗೆ ಕರೆ ನೀಡಿದರು. ಮಹಿಳೆ ಆರ್ಥಿಕವಾಗಿ, ರಾಜಕೀಯವಾಗಿ ಸಬಲಳಾದರೆ, ಸಾಮಾಜಿಕವಾಗಿ ತಾವಾಗಿಯೇ ಬದಲಾವಣೆಯನ್ನು ತರುತ್ತಾರೆ ಎಂಬ ನಿಲುವಿನೊಂದಿಗೆ, ನೊಂದ ಮಹಿಳೆಯರಿಗೆ ಸಾಂತ್ವಾನದ ಜೊತೆಗೆ ಆರ್ಥಿಕ ವಿಮೋಚನೆಗಾಗಿ ನೇಯ್ಗೆ ವೃತ್ತಿಗೆ ಉತ್ತೇಜನ ನೀಡಿದರು. ಮಹಿಳೆಯರು ಸಂಘಟನೆಗಳನ್ನು ಸ್ಥಾಪಿಸುವಲ್ಲಿ ಅವರಲ್ಲಿ ಅರಿವನ್ನು ಉಂಟುಮಾಡುವುದರೊAದಿಗೆ ಮಹಿಳಾ ವಿಮೋಚನೆ, ಸಬಲೀಕರಣ ಕುರಿತಂತೆ ಇವರ ನಿಲುವುಗಳು ವಿಭಿನ್ನವಾಗಿದ್ದು, ಮಹಿಳೆಯರ ಸಬಲೀಕರಣದಲ್ಲಿ ಇವರ ಕೊಡುಗೆ ಅವಿಸ್ಮರಣೀಯವಾದುದು.ಜiv>
How to cite this article:
ಡಾ. ಕವಿತಾ. ಜಿ. ಎನ್. ಮಹಿಳಾ ಸಬಲೀಕರಣ ಕುರಿತಂತೆ ಗಾಂಧೀಜಿಯವರ ದೃಷ್ಠಿಕೋನಗಳು. Int J Appl Res 2020;6(3):462-465.